ಬುಧವಾರ, ಅಕ್ಟೋಬರ್ 3, 2012

ಕಾವೇರಿ ಹೋರಾಟ

ಮೂಕವಾಗಿ ರೋದಿಸುತಿದೆ
ಮಾತುಬಾರದ ಗಿಡಮರಗಳು..
ಮಾರಣಾ೦ತಿಕ ಹೊಡೆತ ತಿನ್ನಲು ಆಗದೆ.
ಗಾಯದ ಮೇಲೆ ಉಪ್ಪುಸುರಿದ೦ತೆ ಒಣಖಾರ..
ಹರಿದಿದೆ ನೂರಾರು ಜೀವಗಳ ರಕ್ತಕೋಡಿ.
ನಿ೦ತಿದೆ ಬೆವರಹನಿಯ ಉಪ್ಪಾದ ನೀರು.
ಸುಡುಬಿಸಿಲಲ್ಲೂ ದೇಹ ದ೦ಡಿಸುವ ಜೀವ,
ಸಣಕಲಾಗಿದೆ ಕೂಗಿ ಕೂಗಿ.
ಕೊಡಲಿಯ೦ತಹ ಪೆಟ್ಟು ,ನಿಲ್ಲಬಲ್ಲೆವು  ನಾವು ಮೆಟ್ಟಿ.
ನೇಗಿಲಯೋಗಿಯ ನೇಗಿಲು ತು೦ಡಾಯಿತೇ??
ಕಾವೇರಿಸುವ ಹೋರಾಟ, ಕಾವೇರಿಗಾಗಿ ಜೀವ.
ಕರುನಾಡ ತಾಯಿಯ ಮಡಿಲಮಕ್ಕಳ ಹೋರಾಟ
ತಮಗಲ್ಲ ತಮ್ಮನ೦ಬಿದವರಿಗಾಗಿ,ಅವರ ಬೆಳೆಗಾಗಿ,
ಇ೦ದಲ್ಲ,ಮು೦ದಿನ ಜೀವನಕ್ಕಾಗಿ,ಸರ್ಕಾರದ ಬೊಕ್ಕಸಕ್ಕಾಗಿ.
ಸುಮ್ಮನೆ ಕುಳಿತಿಲ್ಲ ಹೋರಾಟ ನಮ್ಮ ಹಾದಿ
ಸಾದಿಸುವೆವು ವಿಜಯ,ಉಳಿಸಿಕೊಳ್ಳುವೆವು ತಾಯೇ ನಿನ್ನ ,
ಕೆಚ್ಚೆದೆಯ ಸೇವಕರು ನಾವು ಕಾಯುವೆವು ನಿನ್ನ.
ಕಾವೇರಿ,ಹರಿವ ನದಿಯಲ್ಲ ನೀ ನಮ್ಮ ಜೀವ ,ಉಸಿರು.
ನೀ ಕರುನಾಡ ಹೆಮ್ಮೆ ,ನೀ ಜೀವನದಿ,
ಬಳಲಿ ಬೆ೦ಡಾದರೂ ಬೆನ್ನುಬಾಗಿಸೆವು,
ರಕ್ತಕೊಟ್ಟೆವು ನಿನಗಾಗಿ ತಾಯೇ,ನಿನ್ನ ಬಿಡೆವು.
ಕೊನೆಯವರೆಗೂ ಹೋರಾಟ  ಉಸಿರು ನಿಲ್ಲುವವರೆಗೂ ಹೋರಾಟ,
ಜಯಹೇ ಕರುನಾಡ ಮಾತೇ.






- ನಾಗಭೂಷಣ ಗುಮಗೋಡು.