ಗುರುವಾರ, ಅಕ್ಟೋಬರ್ 18, 2012

ಜೋಕೆ...!

ಎಲ್ಲಿ ಹೋಯಿತು ನಿಮ್ಮ ಸ್ವಾತಂತ್ರ್ಯದ ಚೌಕಟ್ಟು?
ಸಂವಿಧಾನ ನೀಡಿದ ಸ್ಥಾನಮಾನ.
ಮೂರು ಕಾಸಿಗೆ ಹರಾಜು ಹಾಕುವ ನಿಮಗೆ,
ಏನೆಂದು ಹೇಳಬೇಕು ಶ್ರೀಸಾಮಾನ್ಯರು?


ಎಲ್ಲಿದೆ ಬೆಲೆ ನಿಮಗೆ?ನ್ಯಾಯ ನೀತಿ,ಸತ್ಯಾಸತ್ಯತೆಯುಂಟೇ?
ನಿಮ್ಮ ಮಾಹಿತಿಗಳು,ವಾರ್ತಾವಾಹಿನಿಗಳು ...ಶವಪೆಟ್ಟಿಗೆಗಳು.
ಪೊಳ್ಳು ಸುದ್ದಿಯ ವಾರ್ತಾವಾಹಿನಿಗಳಿಗೆ ಧಿಕ್ಕಾರವಿರಲಿ,
ಕೆಲಸಕ್ಕೆ ಬಾರದ ಮಾಯಾಪೆಟ್ಟಿಗೆಯ ಮಾಯಾಜಾಲ ನಮಗೇಕೆ?


ಯಾವ ಸ್ವಾಮಿ ಕಾವಿ ಬಿಚ್ಚಿದರೇನು?
ನಮಗೇನು ಲಾಭ?ನಿಮಗದು ಮಾತ್ರ ಲಾಭ ದುಡ್ಡಿನ ಸಂತೆ,
ಹಣದ ವ್ಯಾಮೋಹ ಪ್ರಚಾರದ ತವಕ,
ಗಬ್ಬು ಎಬ್ಬಿಸಿದಿರಿ ಸುದ್ದಿಮಾಧ್ಯಮವ.


ಕಿತ್ತು ಹೋದ ಕೆಲಸವಷ್ಟೇ ನಿಮ್ಮ ಪ್ರಚಾರ,
ನೋಡುವವರಿಗಿಲ್ಲವೇ ನಾಚಿಕೆ,ಮಾನ.,
ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ
ನಿಮಗೆ ಸಿಗುವುದೊಂದೇ ಸುದ್ದಿಯೇ???


ಎಲ್ಲಿ ತೋರಿಸುವಿರಿ ನೀವು, ತುತ್ತಿಲ್ಲದ ರೈತನ?
ನೀರಿಲ್ಲದ ಊರನ್ನು,ಬಸ್ಸಿಲ್ಲದ ಹಳ್ಳಿಯನ್ನು,
ಶಾಲೆ ಕಾಣದ ಮಕ್ಕಳನ್ನು,ಏನೂ ಇಲ್ಲದ ಹೈಕಳನ್ನು?
ಸಮಾಜದ ಕಷ್ಟ ನಷ್ಟವನ್ನು ,ಜನರ ನೋವನ್ನು?


ನೇರ ಹೆಜ್ಜೆ ಇಡಿರಿ,ತಪ್ಪು ಹೆಜ್ಜೆ ಇಡಬೇಡಿ,
ಶಿರಸ್ತ್ರಾಣ ಧರಿಸಿ,ಕಲ್ಲು ಬಿದ್ದಾವು ಜೋಕೆ ..!
ಭವಿಷತ್ ಗೆ ಮಾರಕ ಈ ನಿಮ್ಮ ವಾಹಿನಿಗಳು,
ಸರಿದಾರಿಗೆ ಬರದಿದ್ದರೆ ಜನತೆಯೇ ಉತ್ತರಿಸುತ್ತಾರೆ ಜೋಕೆ...!




- ನಾಗಭೂಷಣ ಗುಮಗೋಡು.