ಸೋಮವಾರ, ಅಕ್ಟೋಬರ್ 15, 2012

ಪ್ರೇಮಖೈದಿಗಳು

ಅವಳ ಆ ನಗು ಇವನ ನೋವ ಮರೆಸಿತ್ತು,
ಆ ಮುಗ್ಧ ನೇತ್ರಗಳಲ್ಲಿ ಸಾಂತ್ವಾನದ ಮಾತಿತ್ತು.
ಮಾರ್ಗದರ್ಶನದ ದಾರಿದೀಪವಿತ್ತು,
ಕಲಿಯುವ,ಕಲಿಸುವ ತವಕವಿತ್ತು.


ಆದರೆ ಕಂಡೂ ಕಾಣದ ಅಳುಕಿತ್ತು ಮನದಲ್ಲಿ,
ಎಲ್ಲೋ ತಿವಿಯುವ ಮನಸಿನ ದುಗುಡ,
ಹೇಳಿಕೊಳ್ಳಲು ಮನಸಿದ್ದರೂ ಆಗದ ವಿಚಿತ್ರ ಸಂಕಟ,
ಯಾರ ಬಳಿ,ಯಾರ ವಿರುದ್ಧ ಹೇಗೆ,ಏನು ಹೇಳಲಿ ಎಂಬ ತಳಮಳ.


ಮನಸ್ಸಿನಲ್ಲಿ ಅವನ ಬಗ್ಗೆ ನಾನಾ ಯೋಚನೆ,
ಅವನ ಮೇಲೆ ಕಾಣದ ಪ್ರೀತಿ,ತನ್ನವನಾಗಬೇಕೆಂಬ ಆಸೆ,
ಬಯಕೆಗಳೇನೋ ನೂರಾರು,ಅದೆಲ್ಲಾ ಸಾಧ್ಯವೇ?,
ಅವನ ಬಳಿ ಕೇವಲ ಸ್ನೇಹಿತೆ,ಮನಸ್ಸಿಗೆ ನೂರೆಂಟು ದ್ರೋಹ.!


ಅವಳ ಮಾತು ಇವನಿಗೆ ಸ್ಪಟಿಕದ ಮುತ್ತುಗಳು,
ಅವಳಿಗೆ ಇವನು ದೇವಮಾನವ,ತನ್ನೊಡೆಯನಾಗಲಿ ಎಂಬಾಸೆ,
ವಿಧಿ ಲಿಖಿತ ಬೇರೆ ಇತ್ತು,ಅವಳಲ್ಲಿ ನಿರಾಸೆಯ ಕಾರ್ಮೋಡ ಕವಿದಿತ್ತು,
ಅವನಲ್ಲೂ ಇವಳ ಮೇಲೆ ವ್ಯಾಮೋಹ ಹೇಗೆ ಹೇಳುವನು ಅವಳಿಗೆ??.


ಎರಡು ಜೀವಗಳ ಸ್ನೇಹ, ಒಳಗೊಳಗೆ ಅದು ಪ್ರೇಮ,
ಸುಂದರ ವದನಗಳಲ್ಲಿ ಮೇಲೆ ನಗು,ಒಳಗೆ ನೋವಿನ ಛಾಯೆ,,
ಹೇಳಿಕೊಳ್ಳಲು ಸ್ನೇಹ ಕಳೆದುಕೊಳ್ಳುವ ಭಯ,ಆತಂಕ,
ಅವನೂ ಹೇಳುಲಾರ,ಇವಳೂ ಹೇಳಲಾರಳು,,ಇವರಿಬ್ಬರು ಪ್ರೇಮಖೈದಿಗಳು.




- ನಾಗಭೂಷಣ ಗುಮಗೋಡು.

ಪ್ರೀತಿ

ಯಾರೋ ಗೀಚಿದ ತಲೆಬುಡುವಿಲ್ಲದ ಅಕ್ಷರ,
ಅರ್ಥಕ್ಕೆ ಬಾರದು,ತರ್ಕಕ್ಕೂ ನಿಲುಕದು,
ಸೂರ್ಯಚಂದ್ರರ ಅಂತರದಷ್ಟು ಇದರ ವಿಷಯ,
ಹುಟ್ಟಿಸಿದವರು ಯಾರೋ,ಸಾಯಿಸುವವರಂತೂ ಇಲ್ಲ.


ಸಾಹಿತಿಯ ಸಾಹಿತ್ಯವಲ್ಲ,ಕವಿಯೊಬ್ಬನ ಕವಿತೆಯಲ್ಲ,
ಬಂಧವಿದು ಎರಡು ಹ್ರದಯಗಳ ಸಂಗಮ,
ಅಕ್ಷರಕ್ಕೆ ಅರ್ಥವುಂಟು ವಿಭಜಿಸಲು ಆಗದು,
ಬಣ್ಣರೂಪಗಳಿಲ್ಲ,ಪ್ರಾಣಿಸಂಕುಲದ ನಂಟು..


ಇದಕ್ಕೆ ಸಿಲುಕದವರಿಲ್ಲ,ನೋವು ನಲಿವು ಹೊರತಲ್ಲ,
ಬಡವಬಲ್ಲಿದನಿಲ್ಲ,ಕೂಲಿ ಸೇವಕರಿಲ್ಲ,ಅಲ್ಲಿಹುದು ಲೋಕದ ತಿರುಳು,
ಡಾಂಬರು,ಮಣ್ಣು ರಸ್ತೆಗಳಿಲ್ಲ,ಅಲ್ಲೊಮ್ಮೆ ಇಲ್ಲೊಮ್ಮೆ
ಚುಚ್ಚಿ ರಕ್ತಕಾರುವ ವೇದನೆ,ಅದರ ಎಷ್ಟೋ ಪಟ್ಟು ಸುಖಸಾಗರ..


ರಕ್ತ ಹರಿದಾಡುವ ಜೀವಗಳ ಕೆಂಪುಹನಿ,
ಹ್ರದಯ ಹ್ರದಯಗಳ ಭಾವಾಂತರಂಗದ ಮಿಡಿತದ ಧ್ವನಿ.,
ಪ್ರತಿ ಕ್ಷಣಕ್ಷಣಗಳ ಉನ್ಮಾದದ ತವಕ,
ವರ್ಣಿಸಲು ಸಾಧ್ಯವಾಗದು ಅದೆಂತಾ ವೈಭವ.!!


ಧ್ಯಾನ ನಿರತನಿಗೂ ಉಂಟು,ತಲೆ ಕಡಿಯುವವನಿಗೂ ಉಂಟು,
ಸ್ನೇಹಿತ,ಶತ್ರುವಲ್ಲೂ ಉಂಟು,ಹರೆಯದ ಪೋರರಲ್ಲುಂಟು,
ತಾಯಿಯ ಮಮತೆಯಲ್ಲುಂಟು,ಅಜ್ಜಿಯ ತಾಂಬೂಲದಲ್ಲುಂಟು,
ಅದೊಂದು ಅವ್ಯಕ್ತ ಅನುಭವ,ಸಹಾನುಭಾವ ಅದೇ ಪ್ರೀತಿ......




- ನಾಗಭೂಷಣ ಗುಮಗೋಡು.