ಸೋಮವಾರ, ಅಕ್ಟೋಬರ್ 15, 2012

ಪ್ರೀತಿ

ಯಾರೋ ಗೀಚಿದ ತಲೆಬುಡುವಿಲ್ಲದ ಅಕ್ಷರ,
ಅರ್ಥಕ್ಕೆ ಬಾರದು,ತರ್ಕಕ್ಕೂ ನಿಲುಕದು,
ಸೂರ್ಯಚಂದ್ರರ ಅಂತರದಷ್ಟು ಇದರ ವಿಷಯ,
ಹುಟ್ಟಿಸಿದವರು ಯಾರೋ,ಸಾಯಿಸುವವರಂತೂ ಇಲ್ಲ.


ಸಾಹಿತಿಯ ಸಾಹಿತ್ಯವಲ್ಲ,ಕವಿಯೊಬ್ಬನ ಕವಿತೆಯಲ್ಲ,
ಬಂಧವಿದು ಎರಡು ಹ್ರದಯಗಳ ಸಂಗಮ,
ಅಕ್ಷರಕ್ಕೆ ಅರ್ಥವುಂಟು ವಿಭಜಿಸಲು ಆಗದು,
ಬಣ್ಣರೂಪಗಳಿಲ್ಲ,ಪ್ರಾಣಿಸಂಕುಲದ ನಂಟು..


ಇದಕ್ಕೆ ಸಿಲುಕದವರಿಲ್ಲ,ನೋವು ನಲಿವು ಹೊರತಲ್ಲ,
ಬಡವಬಲ್ಲಿದನಿಲ್ಲ,ಕೂಲಿ ಸೇವಕರಿಲ್ಲ,ಅಲ್ಲಿಹುದು ಲೋಕದ ತಿರುಳು,
ಡಾಂಬರು,ಮಣ್ಣು ರಸ್ತೆಗಳಿಲ್ಲ,ಅಲ್ಲೊಮ್ಮೆ ಇಲ್ಲೊಮ್ಮೆ
ಚುಚ್ಚಿ ರಕ್ತಕಾರುವ ವೇದನೆ,ಅದರ ಎಷ್ಟೋ ಪಟ್ಟು ಸುಖಸಾಗರ..


ರಕ್ತ ಹರಿದಾಡುವ ಜೀವಗಳ ಕೆಂಪುಹನಿ,
ಹ್ರದಯ ಹ್ರದಯಗಳ ಭಾವಾಂತರಂಗದ ಮಿಡಿತದ ಧ್ವನಿ.,
ಪ್ರತಿ ಕ್ಷಣಕ್ಷಣಗಳ ಉನ್ಮಾದದ ತವಕ,
ವರ್ಣಿಸಲು ಸಾಧ್ಯವಾಗದು ಅದೆಂತಾ ವೈಭವ.!!


ಧ್ಯಾನ ನಿರತನಿಗೂ ಉಂಟು,ತಲೆ ಕಡಿಯುವವನಿಗೂ ಉಂಟು,
ಸ್ನೇಹಿತ,ಶತ್ರುವಲ್ಲೂ ಉಂಟು,ಹರೆಯದ ಪೋರರಲ್ಲುಂಟು,
ತಾಯಿಯ ಮಮತೆಯಲ್ಲುಂಟು,ಅಜ್ಜಿಯ ತಾಂಬೂಲದಲ್ಲುಂಟು,
ಅದೊಂದು ಅವ್ಯಕ್ತ ಅನುಭವ,ಸಹಾನುಭಾವ ಅದೇ ಪ್ರೀತಿ......




- ನಾಗಭೂಷಣ ಗುಮಗೋಡು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ