ಶುಕ್ರವಾರ, ಅಕ್ಟೋಬರ್ 5, 2012

ಮರ್ಮ


ಕನಿಕರವ ತೋರುವವರಾರು?

ಕಳವಳಗೊ೦ಡ ಮನಸಿಗೆ,

ಜೀವನವೆ೦ಬುದೊ೦ದು ಗುಲಾಬಿ ಗಿಡ,

ಹೂವು ಮುಳ್ಳುಗಳ ಸಮಾಗಮ,

ಹೂವು ಉದುರುವುದು , ಮುಳ್ಳು ಚುಚ್ಚುವುದು,

ಅದು ನೋಡಲಷ್ಟೇ ಚ೦ದ,ಇರಿತ ಬಹಳ.

ಹೇಗೋ ಬೆಸೆದ ಸ್ನೇಹ,ಮಾತಲೊ೦ದಿಷ್ಟು ಪ್ರೀತಿ,ಮಮತೆ.

ಕಡಿಯಿತು ಭಾವಗಳ ಬ೦ಧ ಕಾರಣಗಳಿಗೆ ನಿಲುಕದೆ...,

ಅದಾಗೇ ಆಯಿತು ಬೆಸುಗೆ,ಸಲುಗೆ,ಒಡನಾಟಗಳ ಸೆಲೆ.

ಮುರಿದುಬಿತ್ತು ಒ೦ದೇ ದಿನ ಕಾರಣವಲ್ಲದ ಕಾರಣದಿ೦ದ.

ಏನಿದರ ಮರ್ಮ ಅರಿಯಲಾರೆವೆ ಸರಪಣಿಯ?

ಕರುಣಾಮಯಿ ದೇವ ನೀನೊಬ್ಬ ಬಲ್ಲೆ ಜನ್ಮಾ೦ತರದ ಬ೦ಧ.

ಗೆಳೆಯನಾದರೇನು?ಗೆಳತಿಯಾದರೇನು?ಕಾರಣವ ಹೇಳಬಹುದಲ್ಲವೇ?

ಬಿಡಲಾರದ ಸ್ನೇಹ,ಹ೦ಚಿಕೊಳ್ಳಲಾಗದೇ ಹ೦ಚಿಕೊ೦ಡ ಮಾತು..!

ಎಲ್ಲಾ ಮರೆತು ಹೋಯಿತೇ?ಒ೦ದೇ ದಿನದಲ್ಲಿ..

ನಾನಿ೦ದು ಮಾತನಾಡಲಾರೆ,ಮೌನವೇ ನನ್ನುತ್ತರ.

ಕಾಯುತಿಹೆನು ನಿನ್ನ ಪುನರಾಗಮನಕೆ,ನಿನ್ನ ಸ್ನೇಹಕೆ,

ನಿನ್ನ ಅಭಿರುಚಿ ಬಲ್ಲ ಅಭಿವ್ಯಕ್ತಿ ನಾನು.

ಹೋದೆ ಎಲ್ಲಿಗೆ ಬಹುದೂರ ?,ಕಣ್ಣೀರ ತ೦ದು.

ಮಾರುತವಲ್ಲವಿದು, ಚ೦ಡಮಾರುತ ಬೀಸಿಹೋದೆ ನೀನು.

ಬಲ್ಲವರು ಆಡುವರು,ಆಡುತಿಹರು ತಪ್ಪು ತಪ್ಪು ನನ್ನದೆ೦ದು.

ಅರಿಯದೇ ಮಾಡಿದ ತಪ್ಪುಯಾವುದೆ೦ದು ಯೋಚಿಸಿದೆ.

ಆಲೋಚಿಸಿದೆ,ಒ೦ದೂ ಹೊಳೆಯಲಿಲ್ಲ,ತಿಳಿಯಲಿಲ್ಲ,

ನಿನ್ನ ಅಜ್ನಾತವಾಸದ ಮರ್ಮ ನನಗೆ೦ದು ತಿಳಿಯುವುದು??????
 

 

 

 

- ನಾಗಭೂಷಣ ಗುಮಗೋಡು.