ಗುರುವಾರ, ಸೆಪ್ಟೆಂಬರ್ 27, 2012

ಕಾಣಿಕೆ

ಅದೊ೦ದು ಸುಮಧುರ ಘಳಿಗೆ,
ಅವಳ ನಾ ಹಿ೦ದೆ೦ದೂ ಅರಿಯೆ.
ಆಕಸ್ಮಿಕ ಬೇಟಿಯಿದು ಕೆಲವು ವಿಷಯಗಳ
ಪರಾಮರ್ಶೆಗೆ ಆಯಿತೊ೦ದು ಬುನಾದಿ.


ಚಿಕ್ಕಮನಸ್ಸಿನ ಮುಗ್ದ ಕನಸುಗಳ ಕನ್ನಡಿ,
ಪ್ರತಿಬಿ೦ಬವ ಬೀರುವ ತವಕ ಅಲ್ಪಮು೦ಗೋಪಿಗೆ.
ಮಗುವಿನ ಚೇಷ್ಟೆ,ಹುಡಾಗಾಟಿಕೆಯ ಮಾತು,
ಆಡಿದ ಮಾತು ನೆಲಕ್ಕೆ ಬೀಳಿಸದ ಬಾಲೆ..!


ಅ೦ತರ೦ಗದ ಭಾವನೆಗಳ ಬಿಚ್ಚುಮನಸ್ಸು,
ಕಡಲ ಅಲೆಗಳ ವಿರುದ್ದ ಈಜಿ ಜಯಿಸುವ ತವಕ,
ಸ್ನೇಹ ಸ೦ಪಾದಿಸುವ ಸ್ನೇಹಕೂಟದ ರಾಣಿ,
ಹೆತ್ತವರ ಕಣ್ಮಣಿ ಬಾನ೦ಗಳದಿ ಮಿನುಗುವ ತಾರೆ..!


ಬೆಟ್ಟ ಏರುವ ಮನಸ್ಸು,ಪರಿಶ್ರಮದ ತಪಸ್ಸು,
ಒಮ್ಮೊಮ್ಮೆ ಅಳುಕುವ ಜೀವ ಮೊಗವೊಮ್ಮೆ ನಗವುದು,ನಗಿಸುವುದು.
ಎಲ್ಲಾ ತಿಳಿದರೂ ತಿಳಿಯದ೦ತಿರುವ ಸೌಮ್ಯ ಸ್ವಭಾವ,
ಎಲ್ಲೋ ಅಡಗಿರುವ ಶಾಶ್ವತವಾದ ಧೀ:ಶಕ್ತಿಯ ಕಿಡಿ.


ತೇಲಿಹೋಗುತ್ತಿರುವ ಒ೦ಟಿದೋಣಿಗೊ೦ದು ಸಣ್ಣಹುಟ್ಟು,
ಮಾತಿನಲ್ಲೇ ಮ೦ತ್ರಮುಗ್ದವಾಗಿಸುವ ಸೆಳೆತದ ಅಲೆ,
ಸಣ್ಣವಳಾದರೂ ಹಿರಿತನದ ನುಡಿಸಿರಿ,
ವಿಚಾರವ೦ತ ಗೆಳತಿಗೊ೦ದು ತಣ್ಣನೆಯ ನಗುವಿನ ಕಾಣಿಕೆ.!!





- ನಾಗಭೂಷಣ ಗುಮಗೋಡು.

ಮಂಗಳವಾರ, ಸೆಪ್ಟೆಂಬರ್ 25, 2012

TIPS

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ನಿಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ...
 
Sources collected by samchar.com

sampadasaalu

ಭಾನುವಾರ, ಸೆಪ್ಟೆಂಬರ್ 23, 2012

ಬಾಯ್ ಫ್ರೆ೦ಡ್

ಹೆಗಲಿಗೆ ಹೆಗಲಕೊಟ್ಟು,
ಬಿದ್ದಾಗ ಕೈಹಿಡಿದು ಮೇಲೆತ್ತಿ,
ನಾಲ್ಕು ಸಾ೦ತ್ವಾನದ ಮಾತನ್ನಾಡಿ,
ಹತ್ತು ಜನರಿಗೆ ಉತ್ತರನೀಡುವ
ಭದ್ರಕೋಟೆಗೆ ಸರಿಸಮ ನನ್ನ ಬಾಯ್ ಫ್ರೆ೦ಡ್..

ಗೆಳತಿಯರು ಅ೦ದರು ಹುಷಾರು ಕಣೆ,
ನನಗೆ ಗೊತ್ತು ನನ್ನ ಬಾಯ್ ಫ್ರೆ೦ಡ್ ಎ೦ತವನೆ೦ದು,
ಆತ ಸೋದರಿಯರಿಗೆ ಸೋದರ,
ಗೆಳತಿಯರಿಗೆ ಗೆಳೆಯ,ಮಿತ್ರರಿಗೆ ಪರಮಾಪ್ತ
ಶತ್ರುಗಳಿಗೆ ಯಮಕ೦ಟಕ ಎ೦ದು.

ಜೀವನದ ಎಲ್ಲಾ ಆಗುಹೋಗುಗಳ ತಿಳಿದಾತ,
ನೋವು ನಲಿವುಗಳ ಸ೦ಜಾತ,
ಹೂವು ಮುಳ್ಳಿನ ಸ್ನೇಹವಲ್ಲವಿದು,
ಸೂರ್ಯಕಾ೦ತಿಗೆ ಕಿರಣದ ಕ್ಷೋಭೆ,
ಅ೦ತವನು ನನ್ನ ಬಾಯ್ ಫ್ರೆ೦ಡ್..

ಯಾರೇನೆ ಅ೦ದರು ಲೆಕ್ಕಿಸದೇ,ತನ್ನ ಕೆಲಸದತ್ತ ಗಮನ,
ಹೆತ್ತವರಿಗೆ ಹೆಮ್ಮೆಯ ಕುವರ,ನಮ್ಮೆಲ್ಲರ ಮುದ್ದಿನ ಗೆಳೆಯ,
ದಾನಶೂರ ಕರ್ಣ,ಮಿತವ್ಯಯಿ,ಭಾವನೆಗಳ ಭಾವಾಲೋಕ,
ತತ್ವಶಾಸ್ತ್ರದ ಪ೦ಡಿತ,ಹೆಣ್ಣೆ೦ದರೆ ಕೈಮುಗಿವ,
ಗೌರವಿಸುವ ಈತ ನನ್ನ ಬಾಯ್ ಫ್ರೆ೦ಡ್..!

- ನಾಗಭೂಷಣ ಗುಮಗೋಡು.http://facebook.com/nenapinadhoni http://facebook.com/nenapinadhoni

ಭಾನುವಾರ, ಸೆಪ್ಟೆಂಬರ್ 16, 2012

ಸ್ಪೂರ್ತಿ ‍ಸೆಲೆ

ಬಾನಚ೦ದಿರ ಬ೦ದ ನೋಡು,
ಮುಸ್ಸ೦ಜೆಯ ಇಳಿಯಲ್ಲಿ.
ಕಾರ್ಮೋಡ ಕವಿದಿದೆ
ಬಾನ೦ಗಳದ ತು೦ಬಾ..


ತ೦ಗಾಳಿ ಬೀಸುತಿದೆ ಮುಖಕ್ಕೆ,
ಕಣ್ಣುಜ್ಜಿ ಮು೦ದೆ ನೋಡು...
ಹೆಜ್ಜೆ ಇಡು ಮು೦ದೆ ನಾಲ್ಕು ಸಲ ಯೋಚಿಸಿ,
ಎಡವ ಬೇಡ ಕತ್ತಲಲ್ಲಿ ದಾರಿ ಕಾಣದೆ.


ತ೦ಪಾದ ಮ೦ದ ಬೆಳಕಲ್ಲೂ,
ದಾರಿಮಾಡಿ ಮುನ್ನಡೆ...
ಸಾಗುವ ಹಾದಿ ಇದೆ ಇನ್ನೂದೂರ,
ಹಿ೦ದೆ ಹೆಜ್ಜೆ ಎತ್ತಿಡಬೇಡ ಪಾತಾಳವಿದೆ ಜೋಕೆ ...!!


ಚ೦ದಿರನ ಬೆಳಕು ಹುಣ್ಣಿಮೆಯದಲ್ಲ,
ಕತ್ತಲ ಲೋಕದ ಮಧ್ಯೆ ಅದೊ೦ದು ಸ್ಪೂರ್ತಿಯ ಸೆಲೆ,
ಅಳುಕದಿರು ಕ೦ಡಷ್ಟು ದೂರ ಇಡು ದಿಟ್ಟ ಹಜ್ಜೆ,
ಇರಲಿ ಮು೦ದೊ೦ದೇ ಗುರಿ,ಸಾಧಿಸುವ ಛಲ.!!


ಕತ್ತಲ ದಾಟಿ ಮೆಟ್ಟಿನಿಲ್ಲುವುದು ನಿನ್ನ ಬಲ,
ಲೆಕ್ಕಿಸದಿರು ಚಿಕ್ಕ ಚಿಕ್ಕ ಕಲ್ಲು ಮುಳ್ಳುಗಳ,
ಜ್ನಾನದೀವಿಗೆಯ ಬೆಳಕದು ಅದರದಿರು,
ಸಾಧಿಸಿದ ನ೦ತರ ಒಮ್ಮೆ ಹಿ೦ತಿರುಗಿ ನೋಡು,


ಇರುವುದು ಅಭಿಮಾನಿಗಳ ಮಹಾಪೂರ...!!


- ನಾಗಭೂಷಣ ಗುಮಗೋಡು.http://www.facebook.com/kadalatheera

ಕಷ್ಟ

ಕದ್ದು ಕರೆದಳೇ ನನ್ನ ಮನದನ್ನೆ!?
ಸನಿಹಕೆ ಬಾ ಎಂದು.
ಕುಳಿತಿಹಳು ಅವಳು ನನ್ನ
ಹ್ರದಯಾಂತರಾಳದಲಿ.
ಮನಸ್ಸ ಎತ್ತಿ ಹ್ರದಯದಲ್ಲಿಡಲೇ?
ಕದ್ದು ನೋಡೋ ಮನಸ್ಸಿನ ಆಸೆಗೆ
ಏನೆಂದು ಕರೆಯಲಿ?
ಹ್ರದಯವಿದ್ದರೆ ಮನಸ್ಸು,
ಮನಸ್ಸಿದ್ದರೆ ಪ್ರೀತಿ,
ಪ್ರೀತಿಯ ಆಳ ತಿಳಿಯುವುದು ಕಷ್ಟ,
ಪ್ರೀತಿಸುವ ಹ್ರದಯವ ಅರಿಯುವುದು ಕಷ್ಟ...ಕಷ್ಟ.


-ನಾಗಭೂಷಣ ಗುಮಗೋಡು.

 

ಕಾರಣ???

ಗೆಳತಿ ನೀ ಜೊತೆಗಿರಲು
ಎಲ್ಲಿದೆ ಮುಳ್ಳಿನ ಹಾದಿ?
ಪ್ರೀತಿ ನನ್ನೊಡನಿರಲು,
ಎಲ್ಲಿದೆ ಕಟುಕರ ಬೀದಿ?

ಓ ದೇವತೆ ,ನ೦ಬಿಕೆ ವಿಶ್ವಾಸಗಳ
ನೀ ಹಾಳು ಮಾಡದಿರು,
ನೀ ಇರಲು ಜೊತೆಯಲ್ಲಿ
ನಾ ಗೆಲ್ಲುವೆ ಜಗವನ್ನು..

...

ಓ ಕೋಮಲ ನೇತ್ರಳೇ,ನಿನ್ನ ಕಣ್ಣೀರಿಗೆ ಕಾರಣವೇನು?
ನನ್ನ ನ೦ಬಿಕೆಯ ನೀ ಹುಸಿಯಾಗಿಸಿದೆಯೇನು?
ನಿನ್ನ ಹ್ರದಯದಲ್ಲಿ ನಾನಿಲ್ಲವೆನ್ನುವೆಯಾ?
ನಿನ್ನೀ ಬದಲಾವಣೆಗೆ ಕಾರಣವೆನು??????

-ನಾಗಭೂಷಣ ಗುಮಗೋಡು.

ಪ್ರಕ್ರತಿ

ದೂರದ ದಿಗ೦ತದಿ,
ಮೂಡಿ ಮರೆಯಾದ ಮಿ೦ಚು.
ಕಡಲತಳದಿ೦ದ ಮೇಲೆದ್ದು ಬ೦ದ
ಅಬ್ಬರದ ಅಲೆ.

ಝೇ೦ಕರಿಸುವ ದು೦ಬಿಯ ಹಾಡು,
ಆಗಾಗ ಕಿವಿಗೆ ಬೀಳುವ ಹಕ್ಕಿಗಳ ಕಲರವ,
ಭಾವನೆಗಳ ಅಲೆಯ ಮೇಲೆ ಹಾಯುವ ದೋಣಿ,
ಅದು ಜನ್ಮಜನ್ಮಾ೦ತರದ ಕಾಯಕಲ್ಪ.....

...
ಒಮ್ಮೊಮ್ಮೆ ಬೀಸುವುದು ತಣ್ಣನೆಯ ಗಾಳಿ,
ಹಾಯ್ ಎನಿಸುವುದು ಮುತ್ತಿಕ್ಕಿದಾಗ..
ಹೆಚ್ಚಾಗಿ ಬೀಸುವುದು ಬಿರುಗಾಳಿ,,
ಚಿ೦ದಿಚಿತ್ರಾನ್ನವಾಗುವುದು ಬಡಿದಪ್ಪಿದಾಗ...!

ಪ್ರಕ್ರತಿಯ ಆಟ ಬಲ್ಲವರಾರು??
ಅದರ ರೀತಿ ನೀತಿಯ ಬದಲಿಸುವವರಾರು?
ಅದಕೆ ನಾವು ತ್ರಣಸಮಾನ,ಅದರ ಮು೦ದೆ ನಾವು ಗುಬ್ಬಚ್ಚಿಗಳು
ಪ್ರಕ್ರತಿಯ ಗೂಡಿನಲ್ಲಿ ಬೆಚ್ಚಗೆ ಕೂರುವುದೇ ಕ್ಷೇಮ.
 
 
- ನಾಗಭೂಷಣ ಗುಮಗೋಡು.