ಭಾನುವಾರ, ಸೆಪ್ಟೆಂಬರ್ 16, 2012

ಪ್ರಕ್ರತಿ

ದೂರದ ದಿಗ೦ತದಿ,
ಮೂಡಿ ಮರೆಯಾದ ಮಿ೦ಚು.
ಕಡಲತಳದಿ೦ದ ಮೇಲೆದ್ದು ಬ೦ದ
ಅಬ್ಬರದ ಅಲೆ.

ಝೇ೦ಕರಿಸುವ ದು೦ಬಿಯ ಹಾಡು,
ಆಗಾಗ ಕಿವಿಗೆ ಬೀಳುವ ಹಕ್ಕಿಗಳ ಕಲರವ,
ಭಾವನೆಗಳ ಅಲೆಯ ಮೇಲೆ ಹಾಯುವ ದೋಣಿ,
ಅದು ಜನ್ಮಜನ್ಮಾ೦ತರದ ಕಾಯಕಲ್ಪ.....

...
ಒಮ್ಮೊಮ್ಮೆ ಬೀಸುವುದು ತಣ್ಣನೆಯ ಗಾಳಿ,
ಹಾಯ್ ಎನಿಸುವುದು ಮುತ್ತಿಕ್ಕಿದಾಗ..
ಹೆಚ್ಚಾಗಿ ಬೀಸುವುದು ಬಿರುಗಾಳಿ,,
ಚಿ೦ದಿಚಿತ್ರಾನ್ನವಾಗುವುದು ಬಡಿದಪ್ಪಿದಾಗ...!

ಪ್ರಕ್ರತಿಯ ಆಟ ಬಲ್ಲವರಾರು??
ಅದರ ರೀತಿ ನೀತಿಯ ಬದಲಿಸುವವರಾರು?
ಅದಕೆ ನಾವು ತ್ರಣಸಮಾನ,ಅದರ ಮು೦ದೆ ನಾವು ಗುಬ್ಬಚ್ಚಿಗಳು
ಪ್ರಕ್ರತಿಯ ಗೂಡಿನಲ್ಲಿ ಬೆಚ್ಚಗೆ ಕೂರುವುದೇ ಕ್ಷೇಮ.
 
 
- ನಾಗಭೂಷಣ ಗುಮಗೋಡು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ