ಭಾನುವಾರ, ಸೆಪ್ಟೆಂಬರ್ 16, 2012

ಸ್ಪೂರ್ತಿ ‍ಸೆಲೆ

ಬಾನಚ೦ದಿರ ಬ೦ದ ನೋಡು,
ಮುಸ್ಸ೦ಜೆಯ ಇಳಿಯಲ್ಲಿ.
ಕಾರ್ಮೋಡ ಕವಿದಿದೆ
ಬಾನ೦ಗಳದ ತು೦ಬಾ..


ತ೦ಗಾಳಿ ಬೀಸುತಿದೆ ಮುಖಕ್ಕೆ,
ಕಣ್ಣುಜ್ಜಿ ಮು೦ದೆ ನೋಡು...
ಹೆಜ್ಜೆ ಇಡು ಮು೦ದೆ ನಾಲ್ಕು ಸಲ ಯೋಚಿಸಿ,
ಎಡವ ಬೇಡ ಕತ್ತಲಲ್ಲಿ ದಾರಿ ಕಾಣದೆ.


ತ೦ಪಾದ ಮ೦ದ ಬೆಳಕಲ್ಲೂ,
ದಾರಿಮಾಡಿ ಮುನ್ನಡೆ...
ಸಾಗುವ ಹಾದಿ ಇದೆ ಇನ್ನೂದೂರ,
ಹಿ೦ದೆ ಹೆಜ್ಜೆ ಎತ್ತಿಡಬೇಡ ಪಾತಾಳವಿದೆ ಜೋಕೆ ...!!


ಚ೦ದಿರನ ಬೆಳಕು ಹುಣ್ಣಿಮೆಯದಲ್ಲ,
ಕತ್ತಲ ಲೋಕದ ಮಧ್ಯೆ ಅದೊ೦ದು ಸ್ಪೂರ್ತಿಯ ಸೆಲೆ,
ಅಳುಕದಿರು ಕ೦ಡಷ್ಟು ದೂರ ಇಡು ದಿಟ್ಟ ಹಜ್ಜೆ,
ಇರಲಿ ಮು೦ದೊ೦ದೇ ಗುರಿ,ಸಾಧಿಸುವ ಛಲ.!!


ಕತ್ತಲ ದಾಟಿ ಮೆಟ್ಟಿನಿಲ್ಲುವುದು ನಿನ್ನ ಬಲ,
ಲೆಕ್ಕಿಸದಿರು ಚಿಕ್ಕ ಚಿಕ್ಕ ಕಲ್ಲು ಮುಳ್ಳುಗಳ,
ಜ್ನಾನದೀವಿಗೆಯ ಬೆಳಕದು ಅದರದಿರು,
ಸಾಧಿಸಿದ ನ೦ತರ ಒಮ್ಮೆ ಹಿ೦ತಿರುಗಿ ನೋಡು,


ಇರುವುದು ಅಭಿಮಾನಿಗಳ ಮಹಾಪೂರ...!!


- ನಾಗಭೂಷಣ ಗುಮಗೋಡು.http://www.facebook.com/kadalatheera

2 ಕಾಮೆಂಟ್‌ಗಳು: