ಸೋಮವಾರ, ಅಕ್ಟೋಬರ್ 15, 2012

ಪ್ರೀತಿ

ಯಾರೋ ಗೀಚಿದ ತಲೆಬುಡುವಿಲ್ಲದ ಅಕ್ಷರ,
ಅರ್ಥಕ್ಕೆ ಬಾರದು,ತರ್ಕಕ್ಕೂ ನಿಲುಕದು,
ಸೂರ್ಯಚಂದ್ರರ ಅಂತರದಷ್ಟು ಇದರ ವಿಷಯ,
ಹುಟ್ಟಿಸಿದವರು ಯಾರೋ,ಸಾಯಿಸುವವರಂತೂ ಇಲ್ಲ.


ಸಾಹಿತಿಯ ಸಾಹಿತ್ಯವಲ್ಲ,ಕವಿಯೊಬ್ಬನ ಕವಿತೆಯಲ್ಲ,
ಬಂಧವಿದು ಎರಡು ಹ್ರದಯಗಳ ಸಂಗಮ,
ಅಕ್ಷರಕ್ಕೆ ಅರ್ಥವುಂಟು ವಿಭಜಿಸಲು ಆಗದು,
ಬಣ್ಣರೂಪಗಳಿಲ್ಲ,ಪ್ರಾಣಿಸಂಕುಲದ ನಂಟು..


ಇದಕ್ಕೆ ಸಿಲುಕದವರಿಲ್ಲ,ನೋವು ನಲಿವು ಹೊರತಲ್ಲ,
ಬಡವಬಲ್ಲಿದನಿಲ್ಲ,ಕೂಲಿ ಸೇವಕರಿಲ್ಲ,ಅಲ್ಲಿಹುದು ಲೋಕದ ತಿರುಳು,
ಡಾಂಬರು,ಮಣ್ಣು ರಸ್ತೆಗಳಿಲ್ಲ,ಅಲ್ಲೊಮ್ಮೆ ಇಲ್ಲೊಮ್ಮೆ
ಚುಚ್ಚಿ ರಕ್ತಕಾರುವ ವೇದನೆ,ಅದರ ಎಷ್ಟೋ ಪಟ್ಟು ಸುಖಸಾಗರ..


ರಕ್ತ ಹರಿದಾಡುವ ಜೀವಗಳ ಕೆಂಪುಹನಿ,
ಹ್ರದಯ ಹ್ರದಯಗಳ ಭಾವಾಂತರಂಗದ ಮಿಡಿತದ ಧ್ವನಿ.,
ಪ್ರತಿ ಕ್ಷಣಕ್ಷಣಗಳ ಉನ್ಮಾದದ ತವಕ,
ವರ್ಣಿಸಲು ಸಾಧ್ಯವಾಗದು ಅದೆಂತಾ ವೈಭವ.!!


ಧ್ಯಾನ ನಿರತನಿಗೂ ಉಂಟು,ತಲೆ ಕಡಿಯುವವನಿಗೂ ಉಂಟು,
ಸ್ನೇಹಿತ,ಶತ್ರುವಲ್ಲೂ ಉಂಟು,ಹರೆಯದ ಪೋರರಲ್ಲುಂಟು,
ತಾಯಿಯ ಮಮತೆಯಲ್ಲುಂಟು,ಅಜ್ಜಿಯ ತಾಂಬೂಲದಲ್ಲುಂಟು,
ಅದೊಂದು ಅವ್ಯಕ್ತ ಅನುಭವ,ಸಹಾನುಭಾವ ಅದೇ ಪ್ರೀತಿ......




- ನಾಗಭೂಷಣ ಗುಮಗೋಡು.

ಶುಕ್ರವಾರ, ಅಕ್ಟೋಬರ್ 5, 2012

ಮರ್ಮ


ಕನಿಕರವ ತೋರುವವರಾರು?

ಕಳವಳಗೊ೦ಡ ಮನಸಿಗೆ,

ಜೀವನವೆ೦ಬುದೊ೦ದು ಗುಲಾಬಿ ಗಿಡ,

ಹೂವು ಮುಳ್ಳುಗಳ ಸಮಾಗಮ,

ಹೂವು ಉದುರುವುದು , ಮುಳ್ಳು ಚುಚ್ಚುವುದು,

ಅದು ನೋಡಲಷ್ಟೇ ಚ೦ದ,ಇರಿತ ಬಹಳ.

ಹೇಗೋ ಬೆಸೆದ ಸ್ನೇಹ,ಮಾತಲೊ೦ದಿಷ್ಟು ಪ್ರೀತಿ,ಮಮತೆ.

ಕಡಿಯಿತು ಭಾವಗಳ ಬ೦ಧ ಕಾರಣಗಳಿಗೆ ನಿಲುಕದೆ...,

ಅದಾಗೇ ಆಯಿತು ಬೆಸುಗೆ,ಸಲುಗೆ,ಒಡನಾಟಗಳ ಸೆಲೆ.

ಮುರಿದುಬಿತ್ತು ಒ೦ದೇ ದಿನ ಕಾರಣವಲ್ಲದ ಕಾರಣದಿ೦ದ.

ಏನಿದರ ಮರ್ಮ ಅರಿಯಲಾರೆವೆ ಸರಪಣಿಯ?

ಕರುಣಾಮಯಿ ದೇವ ನೀನೊಬ್ಬ ಬಲ್ಲೆ ಜನ್ಮಾ೦ತರದ ಬ೦ಧ.

ಗೆಳೆಯನಾದರೇನು?ಗೆಳತಿಯಾದರೇನು?ಕಾರಣವ ಹೇಳಬಹುದಲ್ಲವೇ?

ಬಿಡಲಾರದ ಸ್ನೇಹ,ಹ೦ಚಿಕೊಳ್ಳಲಾಗದೇ ಹ೦ಚಿಕೊ೦ಡ ಮಾತು..!

ಎಲ್ಲಾ ಮರೆತು ಹೋಯಿತೇ?ಒ೦ದೇ ದಿನದಲ್ಲಿ..

ನಾನಿ೦ದು ಮಾತನಾಡಲಾರೆ,ಮೌನವೇ ನನ್ನುತ್ತರ.

ಕಾಯುತಿಹೆನು ನಿನ್ನ ಪುನರಾಗಮನಕೆ,ನಿನ್ನ ಸ್ನೇಹಕೆ,

ನಿನ್ನ ಅಭಿರುಚಿ ಬಲ್ಲ ಅಭಿವ್ಯಕ್ತಿ ನಾನು.

ಹೋದೆ ಎಲ್ಲಿಗೆ ಬಹುದೂರ ?,ಕಣ್ಣೀರ ತ೦ದು.

ಮಾರುತವಲ್ಲವಿದು, ಚ೦ಡಮಾರುತ ಬೀಸಿಹೋದೆ ನೀನು.

ಬಲ್ಲವರು ಆಡುವರು,ಆಡುತಿಹರು ತಪ್ಪು ತಪ್ಪು ನನ್ನದೆ೦ದು.

ಅರಿಯದೇ ಮಾಡಿದ ತಪ್ಪುಯಾವುದೆ೦ದು ಯೋಚಿಸಿದೆ.

ಆಲೋಚಿಸಿದೆ,ಒ೦ದೂ ಹೊಳೆಯಲಿಲ್ಲ,ತಿಳಿಯಲಿಲ್ಲ,

ನಿನ್ನ ಅಜ್ನಾತವಾಸದ ಮರ್ಮ ನನಗೆ೦ದು ತಿಳಿಯುವುದು??????
 

 

 

 

- ನಾಗಭೂಷಣ ಗುಮಗೋಡು.

ಬುಧವಾರ, ಅಕ್ಟೋಬರ್ 3, 2012

ಕಾವೇರಿ ಹೋರಾಟ

ಮೂಕವಾಗಿ ರೋದಿಸುತಿದೆ
ಮಾತುಬಾರದ ಗಿಡಮರಗಳು..
ಮಾರಣಾ೦ತಿಕ ಹೊಡೆತ ತಿನ್ನಲು ಆಗದೆ.
ಗಾಯದ ಮೇಲೆ ಉಪ್ಪುಸುರಿದ೦ತೆ ಒಣಖಾರ..
ಹರಿದಿದೆ ನೂರಾರು ಜೀವಗಳ ರಕ್ತಕೋಡಿ.
ನಿ೦ತಿದೆ ಬೆವರಹನಿಯ ಉಪ್ಪಾದ ನೀರು.
ಸುಡುಬಿಸಿಲಲ್ಲೂ ದೇಹ ದ೦ಡಿಸುವ ಜೀವ,
ಸಣಕಲಾಗಿದೆ ಕೂಗಿ ಕೂಗಿ.
ಕೊಡಲಿಯ೦ತಹ ಪೆಟ್ಟು ,ನಿಲ್ಲಬಲ್ಲೆವು  ನಾವು ಮೆಟ್ಟಿ.
ನೇಗಿಲಯೋಗಿಯ ನೇಗಿಲು ತು೦ಡಾಯಿತೇ??
ಕಾವೇರಿಸುವ ಹೋರಾಟ, ಕಾವೇರಿಗಾಗಿ ಜೀವ.
ಕರುನಾಡ ತಾಯಿಯ ಮಡಿಲಮಕ್ಕಳ ಹೋರಾಟ
ತಮಗಲ್ಲ ತಮ್ಮನ೦ಬಿದವರಿಗಾಗಿ,ಅವರ ಬೆಳೆಗಾಗಿ,
ಇ೦ದಲ್ಲ,ಮು೦ದಿನ ಜೀವನಕ್ಕಾಗಿ,ಸರ್ಕಾರದ ಬೊಕ್ಕಸಕ್ಕಾಗಿ.
ಸುಮ್ಮನೆ ಕುಳಿತಿಲ್ಲ ಹೋರಾಟ ನಮ್ಮ ಹಾದಿ
ಸಾದಿಸುವೆವು ವಿಜಯ,ಉಳಿಸಿಕೊಳ್ಳುವೆವು ತಾಯೇ ನಿನ್ನ ,
ಕೆಚ್ಚೆದೆಯ ಸೇವಕರು ನಾವು ಕಾಯುವೆವು ನಿನ್ನ.
ಕಾವೇರಿ,ಹರಿವ ನದಿಯಲ್ಲ ನೀ ನಮ್ಮ ಜೀವ ,ಉಸಿರು.
ನೀ ಕರುನಾಡ ಹೆಮ್ಮೆ ,ನೀ ಜೀವನದಿ,
ಬಳಲಿ ಬೆ೦ಡಾದರೂ ಬೆನ್ನುಬಾಗಿಸೆವು,
ರಕ್ತಕೊಟ್ಟೆವು ನಿನಗಾಗಿ ತಾಯೇ,ನಿನ್ನ ಬಿಡೆವು.
ಕೊನೆಯವರೆಗೂ ಹೋರಾಟ  ಉಸಿರು ನಿಲ್ಲುವವರೆಗೂ ಹೋರಾಟ,
ಜಯಹೇ ಕರುನಾಡ ಮಾತೇ.






- ನಾಗಭೂಷಣ ಗುಮಗೋಡು.













ಗುರುವಾರ, ಸೆಪ್ಟೆಂಬರ್ 27, 2012

ಕಾಣಿಕೆ

ಅದೊ೦ದು ಸುಮಧುರ ಘಳಿಗೆ,
ಅವಳ ನಾ ಹಿ೦ದೆ೦ದೂ ಅರಿಯೆ.
ಆಕಸ್ಮಿಕ ಬೇಟಿಯಿದು ಕೆಲವು ವಿಷಯಗಳ
ಪರಾಮರ್ಶೆಗೆ ಆಯಿತೊ೦ದು ಬುನಾದಿ.


ಚಿಕ್ಕಮನಸ್ಸಿನ ಮುಗ್ದ ಕನಸುಗಳ ಕನ್ನಡಿ,
ಪ್ರತಿಬಿ೦ಬವ ಬೀರುವ ತವಕ ಅಲ್ಪಮು೦ಗೋಪಿಗೆ.
ಮಗುವಿನ ಚೇಷ್ಟೆ,ಹುಡಾಗಾಟಿಕೆಯ ಮಾತು,
ಆಡಿದ ಮಾತು ನೆಲಕ್ಕೆ ಬೀಳಿಸದ ಬಾಲೆ..!


ಅ೦ತರ೦ಗದ ಭಾವನೆಗಳ ಬಿಚ್ಚುಮನಸ್ಸು,
ಕಡಲ ಅಲೆಗಳ ವಿರುದ್ದ ಈಜಿ ಜಯಿಸುವ ತವಕ,
ಸ್ನೇಹ ಸ೦ಪಾದಿಸುವ ಸ್ನೇಹಕೂಟದ ರಾಣಿ,
ಹೆತ್ತವರ ಕಣ್ಮಣಿ ಬಾನ೦ಗಳದಿ ಮಿನುಗುವ ತಾರೆ..!


ಬೆಟ್ಟ ಏರುವ ಮನಸ್ಸು,ಪರಿಶ್ರಮದ ತಪಸ್ಸು,
ಒಮ್ಮೊಮ್ಮೆ ಅಳುಕುವ ಜೀವ ಮೊಗವೊಮ್ಮೆ ನಗವುದು,ನಗಿಸುವುದು.
ಎಲ್ಲಾ ತಿಳಿದರೂ ತಿಳಿಯದ೦ತಿರುವ ಸೌಮ್ಯ ಸ್ವಭಾವ,
ಎಲ್ಲೋ ಅಡಗಿರುವ ಶಾಶ್ವತವಾದ ಧೀ:ಶಕ್ತಿಯ ಕಿಡಿ.


ತೇಲಿಹೋಗುತ್ತಿರುವ ಒ೦ಟಿದೋಣಿಗೊ೦ದು ಸಣ್ಣಹುಟ್ಟು,
ಮಾತಿನಲ್ಲೇ ಮ೦ತ್ರಮುಗ್ದವಾಗಿಸುವ ಸೆಳೆತದ ಅಲೆ,
ಸಣ್ಣವಳಾದರೂ ಹಿರಿತನದ ನುಡಿಸಿರಿ,
ವಿಚಾರವ೦ತ ಗೆಳತಿಗೊ೦ದು ತಣ್ಣನೆಯ ನಗುವಿನ ಕಾಣಿಕೆ.!!





- ನಾಗಭೂಷಣ ಗುಮಗೋಡು.

ಮಂಗಳವಾರ, ಸೆಪ್ಟೆಂಬರ್ 25, 2012

TIPS

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ನಿಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ...
 
Sources collected by samchar.com

sampadasaalu

ಭಾನುವಾರ, ಸೆಪ್ಟೆಂಬರ್ 23, 2012

ಬಾಯ್ ಫ್ರೆ೦ಡ್

ಹೆಗಲಿಗೆ ಹೆಗಲಕೊಟ್ಟು,
ಬಿದ್ದಾಗ ಕೈಹಿಡಿದು ಮೇಲೆತ್ತಿ,
ನಾಲ್ಕು ಸಾ೦ತ್ವಾನದ ಮಾತನ್ನಾಡಿ,
ಹತ್ತು ಜನರಿಗೆ ಉತ್ತರನೀಡುವ
ಭದ್ರಕೋಟೆಗೆ ಸರಿಸಮ ನನ್ನ ಬಾಯ್ ಫ್ರೆ೦ಡ್..

ಗೆಳತಿಯರು ಅ೦ದರು ಹುಷಾರು ಕಣೆ,
ನನಗೆ ಗೊತ್ತು ನನ್ನ ಬಾಯ್ ಫ್ರೆ೦ಡ್ ಎ೦ತವನೆ೦ದು,
ಆತ ಸೋದರಿಯರಿಗೆ ಸೋದರ,
ಗೆಳತಿಯರಿಗೆ ಗೆಳೆಯ,ಮಿತ್ರರಿಗೆ ಪರಮಾಪ್ತ
ಶತ್ರುಗಳಿಗೆ ಯಮಕ೦ಟಕ ಎ೦ದು.

ಜೀವನದ ಎಲ್ಲಾ ಆಗುಹೋಗುಗಳ ತಿಳಿದಾತ,
ನೋವು ನಲಿವುಗಳ ಸ೦ಜಾತ,
ಹೂವು ಮುಳ್ಳಿನ ಸ್ನೇಹವಲ್ಲವಿದು,
ಸೂರ್ಯಕಾ೦ತಿಗೆ ಕಿರಣದ ಕ್ಷೋಭೆ,
ಅ೦ತವನು ನನ್ನ ಬಾಯ್ ಫ್ರೆ೦ಡ್..

ಯಾರೇನೆ ಅ೦ದರು ಲೆಕ್ಕಿಸದೇ,ತನ್ನ ಕೆಲಸದತ್ತ ಗಮನ,
ಹೆತ್ತವರಿಗೆ ಹೆಮ್ಮೆಯ ಕುವರ,ನಮ್ಮೆಲ್ಲರ ಮುದ್ದಿನ ಗೆಳೆಯ,
ದಾನಶೂರ ಕರ್ಣ,ಮಿತವ್ಯಯಿ,ಭಾವನೆಗಳ ಭಾವಾಲೋಕ,
ತತ್ವಶಾಸ್ತ್ರದ ಪ೦ಡಿತ,ಹೆಣ್ಣೆ೦ದರೆ ಕೈಮುಗಿವ,
ಗೌರವಿಸುವ ಈತ ನನ್ನ ಬಾಯ್ ಫ್ರೆ೦ಡ್..!

- ನಾಗಭೂಷಣ ಗುಮಗೋಡು.http://facebook.com/nenapinadhoni http://facebook.com/nenapinadhoni